ಮಂಡ್ಯ: ಬಣ್ಣ ಮಾಸಿದ ರಾಷ್ಟ್ರಧ್ವಜವನ್ನು ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮಪಂಚಾಯತ್ ಕಚೇರಿ ಮೇಲೆ ಹಾರಿಸುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮ ಪಂಚಾಯತ್ ಕಚೇರಿ ಮೇಲೆ ಹಾರಿಸುತ್ತಿರುವ ರಾಷ್ಟ್ರ ಧ್ವಜ ಹಳೆಯದಾಗಿದೆ. ಹಲವು ದಿನಗಳಿಂದಲೂ ಒಂದೇ ಧ್ವಜ ಬಳಸುತ್ತಿರುವುದರಿಂದ ಧ್ವಜದ ಕೇಸರಿ ಬಣ್ಣ ಭಾಗಶಃ ಬಿಳಿಯ ಬಣ್ಣದಂತೆ ಕಾಣುತ್ತಿದೆ.
ದಿನ ಬೆಳಗ್ಗೆ ಧ್ವಜ ಹಾರಿಸಿ ಸಂಜೆ ಇಳಿಸಲಾಗುತ್ತೆ. ದಿನ ನಿತ್ಯ ಧ್ವಜ ನೋಡುವ ಅಧಿಕಾರಿಗಳಿಗೆ ಬಣ್ಣ ಮಾಸಿದ ರಾಷ್ಟ್ರ ಧ್ವಜವನ್ನು ಹಾರಿಸಬಾರದು ಎಂಬ ಪರಿಜ್ಞಾನವಿಲ್ಲ. ಸರ್ಕಾರಿ ಸಂಬಳ ತೆಗೆದುಕೊಂಡರೂ ರಾಷ್ಟ್ರ ಧ್ವಜದ ಬಗ್ಗೆ ಕನಿಷ್ಟ ಸೌಜನ್ಯ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.