ಹಾಸನ: ಯುವತಿಯೊಬ್ಬಳ ಫೋಟೋದ ಮೇಲೆ ಅವಹೇಳನಕಾರಿ ಬರಹ ಹಾಕಿ ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಬೇಲೂರು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲನನ್ನು ಪೊಲೀಸರು ಬಂಧಿಸಿದ್ದಾರೆ.
ಕಾಲೇಜಿನ ಅಧೀಕ್ಷರಾಗಿರುವ ಕೇಶವ್ ಕಿರಣ್ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಕಾಲೇಜು ಪ್ರಾಂಶುಪಾಲರಾಗಿರುವ ಜಯಣ್ಣ ಗೌಡ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ತಮ್ಮ ಪುತ್ರಿಯ ಭಾವಚಿತ್ರವಿರುವ ಫೋಟೋದಲ್ಲಿ ಅವಹೇಳನ ಬರಹ ಬರೆದು ವಾಟ್ಸಾಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ಮೇಲೆ ವೈಯುಕ್ತಿಕ ದ್ವೇಷಕ್ಕೆ ನನ್ನ ಕುಟುಂಬದ ಸದಸ್ಯರ ತೇಜೋವಧೆ ಮಾಡಿದ್ದಾರೆ ಎಂದು ಕೇಶವ್ ಆರೋಪಿಸಿ ದೂರು ನೀಡಿದ್ದರು.
ಸದ್ಯ ಆರೋಪಿ ಜಯಣ್ಣ ಗೌಡನನ್ನು ಬೇಲೂರು ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.