ಹುಬ್ಬಳ್ಳಿ: ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ಮಾತನಾಡಿದ ತಮ್ಮ ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಮಾತು ಎತ್ತಲಿಲ್ಲ. ಈಗ ಕಾಂಗ್ರೆಸ್ ನವರ ನಾಟಕ ಗೊತ್ತಾಗುತ್ತೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯ ಚಾಮುಂಡೇಶ್ವರಿ ಸ್ಲಮ್ ನಲ್ಲಿ ವಾಸ್ತವ ಹೂಡಿದ್ದ ಶೆಟ್ಟರ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ರವರಿಗೆ ಹಿಂದೂಗಳ ಓಟು ಬೇಕಾಗಿದೆ. ಆದ್ದರಿಂದ ಅವರಿಗೆ ಮಠ, ಮಂದಿರಗಳ ನೆನಪಾಗಿದೆ. ಸೆಕ್ಯೂಲರ್ ಎನ್ನೋ ನಾಟಕ ಮಾಡಬೇಡಿ. ಎಲ್ಲರನ್ನೂ ಸಮಾನಾಗಿ ಕಾಣಬೇಕು. ಮಹದಾಯಿ ಬಗ್ಗೆ ಕಾಂಗ್ರೆಸ್ ನಿಲವು ಏನು ಎಂಬುದನ್ನು ಇವರು ಸ್ಪಷ್ಟವಾಗಿ ತಿಳಿಸಬೇಕು ಅಂದ್ರು.
ಮಹದಾಯಿ ವಿಚಾರವಾಗಿ ಅವರು ಬೆಂಬಲ ಕೊಡ್ತೀವಿ ಎಂದು ಹೇಳಬೇಕಿತ್ತು. ಆದರೆ ರಾಹುಲ್ ಅವರು ತಮ್ಮ ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಮಾತು ಎತ್ತಲಿಲ್ಲ. ಈಗ ಕಾಂಗ್ರೆಸ್ನವರ ನಾಟಕ ಗೊತ್ತಾಗುತ್ತೆ ಎಂದು ಕಿಡಿಕಾರಿದ್ರು.
ಇದೇ ಸಂದರ್ಭದಲ್ಲಿ ಬಿಜೆಪಿಯವರ ಸ್ಲಂ ವಾಸ್ತವ್ಯ ಕುರಿತಂತೆ ಮಾತನಾಡಿದ ಅವರು, ಸ್ಲಂನಲ್ಲಿ ಬೆಳಗ್ಗೆಯಿಂದ ವಾಕಿಂಗ್ ಮಾಡಿ ಅವರ ಸಮಸ್ಯೆಯನ್ನು ಆಲಿಸಿದ್ದೇನೆ. ಇವರಿಗೆ ಮೊದಲನೆಯದಾಗಿ ಹಕ್ಕು ಪತ್ರ ನೀಡಬೇಕು. ನಾವು ಈ ಹಿಂದೆಯೇ ಇಲ್ಲಿ ಮೂಲಭೂತ ಸೌಕರ್ಯ ನೀಡಿದ್ದೆವೆ ಎಂದು ಶೆಟ್ಟರ್ ತಿಳಿಸಿದ್ರು.