ಮೈಸೂರು: ಸತ್ತವರ ಓಟುಗಳನ್ನು ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ ಎಂದಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ವರ್ಷವಾದ್ರೂ ಯಾವುದೇ ಕ್ರಮ ಕೈಗೊಳ್ಳದೆ ಮೈಸೂರು ಜಿಲ್ಲಾಧಿಕಾರಿ ರಂದೀಪ್ ಕಾನೂನು ಮರೆತರಾ ಎಂಬ ಪ್ರಶ್ನೆ ಎದ್ದಿದೆ.
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ, ಸತ್ತವರ ಓಟುಗಳನ್ನು ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ ಅಂದಿದ್ರು. ಇದು ಭಾರಿ ವಿವಾದಕ್ಕೆ ಕಾರಣವಾದ ಬಳಿಕ ಸಾಮಾಜಿಕ ಕಾರ್ಯರ್ತ ಮರಿಲಿಂಗೇಗೌಡ ಮಾಲಿಪಾಟೀಲ್ ಸಿಎಂ ಶಾಸಕತ್ವ ರದ್ದುಪಡಿಸಬೇಕೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ರು.
ಅದರಂತೆ 2016ರ ಅಕ್ಟೋಬರ್ ತಿಂಗಳಲ್ಲಿ ತನಿಖೆ ನಡೆಸುವಂತೆ ಚುನಾವಣಾ ಆಯೋಗ ಡಿಸಿಗೆ ಪತ್ರ ಬರೆದಿತ್ತು. ಆದ್ರೆ ಮೈಸೂರು ಡಿಸಿ ರಂದೀಪ್ ತನಿಖೆ ನಡೆಸದೆ ಉಪವಿಭಾಗಾಧಿಕಾರಿಗೆ ಪತ್ರ ಬರೆದಿದ್ರು. ಉಪವಿಭಾಗಾಧಿಕಾರಿಯೂ ಕೂಡ ತಹಶೀಲ್ದಾರ್ ಗೆ ಪತ್ರ ಬರೆದು ಸುಮ್ಮನಾಗಿದ್ದಾರೆ. ಒಟ್ನಲ್ಲಿ ದೂರು ನೀಡಿ ವರ್ಷವಾದ್ರೂ ಡಿಸಿ ಕೈಕಟ್ಟಿ ಕುಳಿತಿರೋದು ಯಾಕೆ ಅನ್ನೋ ಪ್ರಶ್ನೆ ಮೂಡಿದೆ.