ಮೈಸೂರು: ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಮೆರವಣಿಗೆ ವೇಳೆ ತಮಟೆ ನಗಾರಿಯ ಸದ್ದಿಗೆ ಕುದುರೆ ಬೆದರಿ ರಂಪಾಟ ಮಾಡಿದ ಘಟನೆ ಮೈಸೂರಿನ ಕೆ.ಆರ್. ವೃತ್ತದಲ್ಲಿ ನಡೆದಿದೆ.
ಮೈಸೂರಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ವೇಳೆ ಕೆಂಪೇಗೌಡ ವೇಷಧಾರಿಯನ್ನು ಧರಿಸಿದ್ದ ವ್ಯಕ್ತಿಯನ್ನು ಕೆಳಕ್ಕೆ ಬೀಳಿಸಿದೆ. ಕ್ಷಣಕಾಲ ಎಲ್ಲರಲ್ಲೂ ಆತಂಕ ಮೂಡಿತ್ತು.
ತಮಟೆ ನಗಾರಿಯ ಸದ್ದಿಗೆ ಹೆದರಿ ಕೆಂಪೇಗೌಡ ವೇಷಧಾರಿ ವ್ಯಕ್ತಿಯನ್ನು ಕೆಳಕ್ಕೆ ಬೀಳಿಸಿದರಿಂದ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ಕೆಂಪೇಗೌಡ ವೇಷಧಾರಿ ಪಾರಾಗಿದ್ದಾರೆ.