ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯೋಜನಾ ಭಾಗ್ಯಗಳ ಜೊತೆ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟಿನ್ಗೆ ರಾಯಚೂರಿನ ನಗರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ನಗರಸಭೆಯ ಅನುದಾನದಲ್ಲಿ ಕ್ಯಾಂಟಿನ್ ನಡೆಯುವುದರಿಂದ ಎಚ್.ಡಿ.ದೇವೇಗೌಡರ ಹೆಸರಿಡಬೇಕು ಅಂತ ಜೆಡಿಎಸ್ ಸದಸ್ಯರು, ಅಟಲ್ ಬಿಹಾರಿ ವಾಜಪೇಯಿ ಹೆಸರಿಡಬೇಕು ಅಂತ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದಾರೆ.
ರಾಯಚೂರಿನಲ್ಲಿ ಒಟ್ಟು ಮೂರು ಸ್ಥಳಗಲ್ಲಿ ಕ್ಯಾಂಟಿನ್ ತೆರೆಯಲಾಗುತ್ತಿದ್ದು ಒಂದೊಂದು ಕ್ಯಾಂಟಿನ್ಗೆ ಒಬ್ಬೊಬ್ಬರ ಹೆಸರನ್ನಿಡಲು ಸದಸ್ಯರು ಆಗ್ರಹಿಸಿದ್ದಾರೆ.