– ಹಳಿ ತಪ್ಪಿದ ಅನ್ನದಾತರ ಬದುಕು
ಕಲಬುರಗಿ: ಮೂರು ದಶಕಗಳ ಹಿಂದೆ ಘೋಷಿಸಲಾಗಿದ್ದ ಕಲಬುರಗಿ-ಬೀದರ್ ರೈಲು ಯೋಜನೆಗೆ ಕೊನೆಗೂ ಚಾಲನೆ ಸಿಗಲಿದೆ. ಈ ರೈಲು ಮಾರ್ಗವನ್ನು ಪ್ರಧಾನಿ ಮೋದಿಯವರು ಭಾನುವಾರದಂದು ಲೋಕಾರ್ಪಣೆ ಮಾಡಲಿದ್ದಾರೆ.
ಇದು ಉತ್ತರ ಕರ್ನಾಟಕದ ಮಂದಿಗೆ ಸಂತಸದ ಸುದ್ದಿಯಾದ್ರೂ ಹಳಿಗಾಗಿ ಭೂಮಿ ಕೊಟ್ಟ ಅನ್ನದಾತರ ಬದುಕು ಹಳಿ ತಪ್ಪಿದೆ. ಯೋಜನೆಗಾಗಿ ಕಲಬುರಗಿಯ 6 ಹಳ್ಳಿಗಳಲ್ಲಿ 271 ಎಕರೆ ಜಮೀನನ್ನು ವಶಪಡಿಸಿಕೊಂಡಿತ್ತು. ಆದ್ರೆ ರೈತರಿಗೆ ಕೊಟ್ಟಿದ್ದು ಮಾತ್ರ ಬಿಡಿಗಾಸು. ಅಂದ್ರೆ ಎಕೆರೆಗೆ ಬರೀ 80 ಸಾವಿರ ರೂಪಾಯಿ. ಇದರಿಂದ ಅವರಿಗೆ ಅಪಾರ ನಷ್ಟವಾಗಿದೆ.
ಇತ್ತ ಕಮಲಾಪುರದಲ್ಲಿ ಗುಂಟೆ ಲೆಕ್ಕಾಚಾರದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಇದುವರೆಗೂ ಪರಿಹಾರ ಕೊಟ್ಟಿಲ್ಲ. ಈ ಬಗ್ಗೆ ಕಲಬುರಗಿ ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ರೂ ಪರಿಹಾರವಾಗಿಲ್ಲ. ರೈಲು ಯೋಜನೆ ವಿಷಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಿತ್ತಾಡುತ್ತಿವೆ. ಆದರೆ ಎರಡೂ ಪಕ್ಷಗಳಿಗೆ ರೈತರ ಜಮೀನಿಗೆ ನ್ಯಾಯಯುತ ಪರಿಹಾರ ಕೊಡಿಸಬೇಕೆಂಬ ಕಾಳಜಿ ಮಾತ್ರ ಇಲ್ಲ.
ಮೋದಿ ಧರ್ಮಸ್ಥಳ ಭೇಟಿಗಾಗಿ ವಿಮಾನದಲ್ಲಿ ಬಂತು ವಿಶೇಷ ಕಾರು! https://t.co/XGL7cZeMUB#modi #modicar #mangaluru #dharmasthala #ujire pic.twitter.com/AhtJ56tAtL
— PublicTV (@publictvnews) October 27, 2017
ಇಂದು ರಾತ್ರಿವರೆಗೆ ಮಂಜುನಾಥನ ದರ್ಶನಕ್ಕೆ ಅವಕಾಶ-ಶ್ರೀಕ್ಷೇತ್ರದಲ್ಲಿ ಕಂಡುಕೇಳರಿಯದ ಭದ್ರತೆ https://t.co/7Euzw4OMLV#Mangaluru #Dharmasthala #Modi pic.twitter.com/iMZJGGbrZ9
— PublicTV (@publictvnews) October 28, 2017