ಹಾಸನ: ಅಪರಿಚಿತ ಲಾರಿವೊಂದು ಡಿಕ್ಕಿಯಾದ ಪರಿಣಾಮ ಯುವಕನ ಕೈ ಎರಡು ತುಂಡಾದ ಭಯಾನಕ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಬಳಿ ನಡೆದಿದೆ.
ಬೆಳಗೋಡು ಗ್ರಾಮದ ನಿವಾಸಿ ಭರತ್ನ ಬಲ ಕೈ ಅಪಘಾದಲ್ಲಿ ಎರಡು ತುಂಡಾಗಿದ್ದು, ಕತ್ತರಿಸಿ ತುಂಡಾಗಿ ಹೋಗಿದ್ದ ಕೈಯನ್ನು ಹುಡುಕಾಡಿ ತಂದು ಖಾಸಗಿ ಆಸ್ಪತ್ರೆಯಲ್ಲಿ ಭರತ್ಗೆ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ತುಂಡಾಗಿದ್ದ ಕೈಯನ್ನು ಜೋಡಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಆದರೂ ವೈದ್ಯರು ಇಂದು ಆಪರೇಷನ್ ಮಾಡಿ ಕೈ ಜೋಡಿಸುವ ಪ್ರಯತ್ನ ಮಾಡಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭರತ್ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದಾಗ ಅಪರಿಚಿತ ಲಾರಿವೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಆದರೆ ಏನಾಗಿದೆ ಎಂದು ನೋಡದೇ ಭಯಗೊಂಡು ಲಾರಿ ಚಾಲಕ ಪರಾರಿಯಾಗಿದ್ದಾನೆ.
ಈ ಘಟನೆಯ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.