ಬೆಂಗಳೂರು: ರೈಲಿನ ಎಸಿ ಕೋಚ್ನಲ್ಲಿದ್ದ ಬೆಡ್ಶೀಟ್ಗಳನ್ನು ಕದ್ದು ಕೊಂಡ್ಯೊಯುತ್ತಿದ್ದ ಕಳ್ಳನನ್ನು ಬಂಧಿಸಿರುವ ಘಟನೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಬುಧವಾರ ಮುಂಜಾನೆ 7 ಘಂಟೆಗೆ ನಗರದ ರೈಲ್ವೇ ನಿಲ್ದಾಣ ಪ್ಲಾಟ್ ಫಾರಂ 1ಕ್ಕೆ ಆಗಮಿಸಿದ ಕರ್ನಾಟಕ ಎಕ್ಸ್ ಪ್ರೆಸ್ (ಬೆಂಗಳೂರು-ನವದೆಹಲಿ) ರೈಲಿನ ಬಿ-01 ಎಸಿ ಕೋಚ್ನಲ್ಲಿದ್ದ ಬೆಡ್ಶೀಟ್ಗಳನ್ನು ಕಂಠ ಪೂರ್ತಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ಕಳ್ಳತನ ಮಾಡಲು ಯತ್ನಿಸಿದ್ದಾನೆ.
ಈ ವೇಳೆ ಈತ ಬೆಡ್ಶೀಟ್ ಗಂಟನ್ನು ಹೆಗಲ ಮೇಲೆ ಇಟ್ಟುಕೊಂಡು ಸಾಗುತ್ತಿದ್ದನ್ನು ಪ್ರಯಾಣಿಕ ಮಹಮ್ಮದ್ ಅಲಿ ಎಂಬವರು ಗಮನಿಸಿ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿ ಮದ್ಯ ಸೇವಿಸಿರುವುದು ತಿಳಿದ ಅವರು ಅನುಮಾನಗೊಂಡು ಕರ್ತವ್ಯದಲ್ಲಿದ್ದ ರೈಲ್ವೇ ರಕ್ಷಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ.
ರೈಲ್ವೇ ಪ್ರಯಾಣದ ನಂತರ ಬೆಡ್ಶೀಟ್ಗಳನ್ನು ಸ್ವಚ್ಛ ಮಾಡಲು ರೈಲ್ವೇ ಸ್ವಚ್ಛತಾ ಸಿಬ್ಬಂದಿ ಅದನ್ನು ಒಂದೆಡೆ ಸಂಗ್ರಹಿಸಿದ್ದರು. ಈ ವೇಳೆ ಸಿಬ್ಬಂದಿಯ ಕಣ್ಣು ತಪ್ಪಿಸಿ ಈತ ಬೆಡ್ಶೀಟ್ಗಳನ್ನು ಕದ್ದು ಪರಾರಿಯಾಗಲು ಯತ್ನಿಸಿ ಪೋಲಿಸರ ಅತಿಥಿಯಾಗಿದ್ದಾನೆ.