ವಿಜಯಪುರ: ಗೋಳಗುಮ್ಮಟ (Gol Gumbaz) ವೀಕ್ಷಣೆಗೆ ಹೋಗಿದ್ದ ವ್ಯಕ್ತಿಯೊಬ್ಬ (Man) ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.
ಸಲೀಂ ತಿಕೋಟ್ಕರ್ (55) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸಲೀಂ ತಿಕ್ಕೋಟ್ಕರ್ ವಿಶ್ವ ವಿಖ್ಯಾತ ಗೋಳಗುಮ್ಮಟದ ವೀಕ್ಷಿಸಲೆಂದು ಬಂದಿದ್ದ. ಎಲ್ಲರ ಜೊತೆ ಸಲೀಂ ಸರತಿ ಸಾಲಿನಲ್ಲಿ ನಿಂತು ಅಂತಸ್ತಿನ ಮೇಲ್ಭಾಗಕ್ಕೆ ಹೋಗಿದ್ದಾನೆ. ಈ ವೇಳೆ ಗೋಳಗುಮ್ಮಟದ ಅಂತಸ್ತಿನ ಮೇಲಿನಿಂದ ಆವರಣದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಇನ್ಮುಂದೆ ವಿದ್ಯುತ್ ಬಿಲ್ ಕಟ್ಟದೇ ಇದ್ದರೆ ಸಂಪರ್ಕವೇ ಕಡಿತ
ಘಟನೆಯು ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಲೀಂ ಆತ್ಮಹತ್ಯೆ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಪ್ರತಿಪಕ್ಷಗಳಿಗೆ ಕೇಸರಿ ಬಣ್ಣ ಎಂದರೆ ಏಕೆ ತಲೆ ಕೆಡುತ್ತೆ?: ಚಕ್ರವರ್ತಿ ಸೂಲಿಬೆಲೆ