ಕೊಪ್ಪಳ: ಯುವಕನ ಮೇಲೆ ಬಸ್ ಹರಿದ ನಂತ್ರ ಗಾಯಗೊಂಡ ಯುವಕ ಸಹಾಯಕ್ಕೆ ಅಂಗಲಾಚಿದ್ರೂ ಯಾವ ಸ್ಥಳೀಯರು ಸಹಾಯ ಮಾಡದ ಅಮಾನವೀಯ ಘಟನೆ ಕೊಪ್ಪಳ ನಗರದ ಪಬ್ಲಿಕ್ ಗ್ರೌಂಡ್ ಬಳಿ ಇಂದು ಬೆಳಗ್ಗೆ 09:30ರ ವೇಳೆಯಲ್ಲಿ ನಡೆದಿದೆ.
ಅನ್ವರ್ ಶಾಬುದ್ದೀನ್ (17) ಅಪಘಾತಕ್ಕೊಳಗಾದ ಯುವಕ. ಅನ್ವರ್ ಮೇಲೆ ಹೊಸಪೇಟೆದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಸರ್ಕಾರಿ ಬಸ್ ಹಾಯ್ದು ಹೋಗಿತ್ತು. ಅನ್ವರ್ ರಕ್ತದ ಮಡುವಿನಲ್ಲಿ ಒದ್ದಾಡಿದರೂ ಯಾರೊಬ್ಬರೂ ಅವನ ಸಹಾಯಕ್ಕೆ ಮುಂದಾಗದೇ ಜನರು ಫೋಟೋ ತೆಗೆಯುತ್ತಾ ನಿಂತಿದ್ದರು.
ಕೊನೆಗೆ ಅನ್ವರ್ನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.