ಬೆಂಗಳೂರು: ಹೇಳಿದ್ದು ಒಂದು ಕಣ್ಣಾರೆ ಕಂಡಿದ್ದು ಇನ್ನೊಂದು. ಕಣ್ಣಾರೆ ಕಂಡಿದ್ದನ್ನ ಪರಾಮರ್ಶೆ ಮಾಡಿ ನೋಡಲೇಬೇಕು. ಇದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಸದ್ಯದ ಸ್ಥಿತಿ. ಕೋಲಾರ (Kolara) ಅಖಾಡದಲ್ಲಿ ಇಳಿದಿದ್ದ ಸಿದ್ದರಾಮಯ್ಯಗೆ ಇನ್ನೊಂದು ಶಾಕ್ ಎದುರಾಗಿದೆ.
ಜಿಲ್ಲೆಯ 6 ಅಭ್ಯರ್ಥಿಗಳು ಗೆಲುವಿಗೆ ಸಾಕಷ್ಟು ಸೈಕಲ್ ಹೊಡೆಯಲೇಬೇಕು ಎಂಬ ಪಕ್ಷದ ಆಂತರಿಕ ವರದಿ ಸಿದ್ದರಾಮಯ್ಯ ಕೈ ಸೇರಿದೆ. ಇರುವುದರಲ್ಲಿ ಶಾಸಕಿ ರೂಪಾ ಶಶಿಧರ್ ಬೆಸ್ಟ್. ಉಳಿದವರು ಗೆಲುವಿಗೆ ಸಾಕಷ್ಟು ಬೆವರು ಹರಿಸಬೇಕು ಎಂದು ವರದಿ ಹೇಳಿದೆ.
ಕೋಲಾರ ಜಿಲ್ಲಾ ಕಾಂಗ್ರೆಸ್ (Congress) ಸ್ಥಿತಿಗತಿ ಅಂದಿಕೊಂಡಷ್ಟು ಸುಲಭವಾಗಿಲ್ಲ. ಜಿಲ್ಲೆಯಲ್ಲಿರುವ ಕಾಂಗ್ರೆಸ್ ಶಾಸಕರು ಹಾಗೂ ಮುಂದಿನ ಅಭ್ಯರ್ಥಿಗಳ ಗೆಲುವಿಗೆ ಸಾಕಷ್ಟು ಶ್ರಮ ಹಾಕಬೇಕು. ಪಕ್ಷದ ಅಭ್ಯರ್ಥಿಗಳು ಗೆಲುವಿಗೆ ಸಿದ್ದರಾಮಯ್ಯರನ್ನೇ ನಂಬಿಕೊಂಡಿದ್ದಾರೆ. ಈ ವರದಿಯಿಂದಾಗಿ ಉಳಿದವರನ್ನು ಗೆಲ್ಲಿಸಲು ಶ್ರಮಿಸಬೇಕಾದ ಒತ್ತಡ ಸಿದ್ದರಾಮಯ್ಯ ಮೇಲಿದೆ.
ಕಾಂಗ್ರೆಸ್ ಪ್ರಾಬಲ್ಯ ಇರುವ ಜಿಲ್ಲೆ ಎಂದು ಕೋಲಾರವನ್ನು ಬಿಂಬಿಸಲಾಗುತ್ತಿದೆಯಾದರೂ ಚುನಾವಣೆಯಲ್ಲಿ (Election) ಅಭ್ಯರ್ಥಿಗಳು ಗೆಲುವಿಗೆ ಸಿದ್ದರಾಮಯ್ಯರನ್ನೇ ನಂಬಿಕೊಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಆಂತರಿಕ ಸ್ಥಿತಿಗತಿಯ ವರದಿ ತರಿಸಿಕೊಂಡ ಸಿದ್ದರಾಮಯ್ಯಗೆ ಶಾಕ್ ಆಗಿದ್ದು ಕೋಲಾರದಿಂದ ಸ್ಪರ್ಧೆಗೆ ಮುಂದಾಗಿರುವ ಸಿದ್ದರಾಮಯ್ಯಗೆ ಈಗ ಸವಾಲುಗಳ ಮೇಲೆ ಸವಾಲು ಎದುರಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k