ಬೆಂಗಳೂರು: 13 ವರ್ಷದ ಬಾಲಕನೊಬ್ಬ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಸೋದರ ಮಾವನೇ ಕೊಲೆ ಮಾಡಿರುವುದಾಗಿ ಬಾಲಕನ ಪೋಷಕರು ಆರೋಪ ಮಾಡುತ್ತಿದ್ದಾರೆ.
ಈತ ಸಂಪಂಗಿ ರಾಮನಗರದ ವಿನಾಯಕ ಶಾಲೆಯಲ್ಲಿ ಓದುತ್ತಿದ್ದ ಪ್ರವೀಣ್ ರಾಜ್ ಮೃತ ಬಾಲಕ. ಬೆಂಗಳೂರಿನ ನ ಸಂಪಗಿರಾಮ ನಗರದಲ್ಲಿರುವ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಡೆತ್ ನೋಟ್ ನಲ್ಲಿ `ಐ ವಿಲ್ ಬ್ಯಾಕ್’ ಅಂತ ಬರೆದಿಟ್ಟಿದ್ದಾನೆ.
ಆರೋಪವೇನು?: ಮೊದಲು ತಾಯಿ ಬೈದಿದ್ದಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು ಎನ್ನಲಾಗಿದ್ದು, ಆ ಬಳಿಕ ಬಾಲಕನ ಆತ್ಮಹತ್ಯೆಗೆ ಆತನ ಸೋದರ ಮಾವನೇ ಕಾರಣ ಅಂತ ಆರೋಪಿಸಲಾಗಿದೆ.
ಸೋದರ ಮಾವನೇ ಆತನೇ ಬಾಲಕನನ್ನು ಕೊಲೆ ಮಾಡಿದ್ದಾನೆ. ಆತನ ಟಾರ್ಚರ್ ನಿಂದಾಗಿ ಪ್ರವೀಣ್ ರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಪೋಷಕರು ಆರೋಪಿಸುತ್ತಿದ್ದಾರೆ.
ಶವಗಾರದ ಮುಂದೆಯೇ ಸಂಬಂಧಿಕರು ಪರಸ್ಪರ ಬಡಿದಾಡಿಕೊಂಡಿದ್ದು, ಸೋದರ ಮಾವನಿಗೆ ಮೃತನ ಸಂಬಂಧಿಗಳು ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ. ಪರಿಣಾಮ ಸೋದರ ಮಾವ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಈ ಕುರಿತು ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.