ರಾಮನಗರ: ಜಿಲ್ಲೆಯಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿದೆ.
ಕನಕಪುರ ತಾಲ್ಲೂಕಿನ ಸಾತನೂರು ಸಮೀಪದಲ್ಲಿ ನರೇಗಾ ಅಡಿಯಲ್ಲಿ ನಿರ್ಮಾಣವಾಗಿದ್ದ ಮೂರು ಚೆಕ್ ಡ್ಯಾಂಗಳು ಒಡೆದು ಹೋಗಿವೆ. ಚೆಕ್ ಡ್ಯಾಂ ಕಳಪೆ ಕಾಮಗಾರಿ ಆರೋಪ ಎದುರಾಗಿದೆ.
ಮಾಗಡಿ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಬಳಿ ಕಾಮಗಾರಿ ಹಂತದಲ್ಲಿದ್ದ 22,000 ಕೆವಿ ಸಾಮರ್ಥ್ಯದ ವಿದ್ಯುತ್ ಮಾರ್ಗದ ಕಬ್ಬಿಣದ ಗೋಪುರ ನೆಲಕಚ್ಚಿದ್ದು ಮಾವಿನ ತೋಪಿನಲ್ಲಿ ಬಿದ್ದಿದೆ. ಚೆಕ್ ಡ್ಯಾಂಗಳು ಇನ್ನು ಹಲವೆಡೆಗಳಲ್ಲಿ ಕೊರೆತ ಕಂಡಿರುವ ಘಟನೆ ಕೂಡಾ ನಡೆದಿದೆ.