ಬಳ್ಳಾರಿ: ನ್ಯಾಯ ಕೇಳಿಕೊಂಡು ಬಂದ ಮಹಿಳೆಗೆ ಪುರಸಭೆ ಮುಖ್ಯಾಧಿಕಾರಿ ಲೈಂಗಿಕ ಕಿರುಕುಳ ನೀಡಿದ ಘಟನೆ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ.
ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆಯ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ ಮಹಿಳೆಯ ಸಮಸ್ಯೆ ಬಗೆಹರಿಸಿಲು ಮಂಚಕ್ಕೆ ಕರೆದ ಘಟನೆ ಇದಾಗಿದೆ. ಆಶ್ರಯ ಮನೆ ಮುಂದಿನ ಒತ್ತುವರಿ ತೆರವು ಮಾಡುವ ವಿಚಾರವಾಗಿ ಮಹಿಳೆಯೊಬ್ಬರು ಮುಖ್ಯಾಧಿಕಾರಿಗೆ ಮನವಿ ಮಾಡಿದ್ರು. ಹೀಗಾಗಿ ಒತ್ತುವರಿ ತೆರವು ಮಾಡಲು ಪುರಸಭೆ ಮುಖ್ಯಾಧಿಕಾರಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಮಂಚಕ್ಕೆ ಕರೆದಿದ್ದಾನೆ.
ಇದನ್ನು ವಿರೋಧಿಸಿದ ಮಹಿಳೆಗೆ ಆಡಿಯೋ ಡಿಲೀಟ್ ಮಾಡದಿದ್ದರೇ ಪೊಲೀಸ್ ಕಂಪ್ಲೇಂಟ್ ನೀಡುವುದಾಗಿ ಸಹ ಬೆದರಿಕೆ ಹಾಕಿದ್ದಾನೆ. ಪುರಸಭೆ ಮುಖ್ಯಾಧಿಕಾರಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಬೆದರಿಕೆಯೊಡ್ಡಿದ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.