ಮೈಸೂರು: ಇಂದು ನಗರದಲ್ಲಿ ನಡೆದ ಸಿಎಂ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಧ ಕಲಾವಿದೆಯೊಬ್ಬರಿಗೆ ಸ್ಥಳದಲ್ಲೇ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆರ್ಕೆಸ್ಟ್ರಾದಲ್ಲಿ ಗಾಯಕಿಯಗಿರುವ ಶೃಂಗೇರಿಯ ಪೂರ್ಣಿಮಾ ಹಾಗೂ ಅವರ ಪತಿ ಕೃಷ್ಣ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಗರಕ್ಕೆ ಆಗಮಿಸಿದ್ದರು. ಈ ವೇಳೆ ಪೂರ್ಣಿಮಾ ಅವರು ಆಕೇಸ್ಟ್ರಾದಲ್ಲಿ ಹಾಡಲು ವಾದ್ಯಗಳ ಕೊಳ್ಳಬೇಕಾಗಿದ್ದು ಆರ್ಥಿಕ ಸಹಾಯ ಬೇಕಾಗಿದೆ ಎಂದು ಸಿಎಂಗೆ ಮನವಿ ಮಾಡಿದ್ರು.
ಮನವಿ ಪತ್ರ ಸ್ವೀಕರಿಸಿದ ಸಿಎಂ ಅವರಿಗೆ 6 ಸಾವಿರ ರೂ. ನಗದು ನೀಡಿ ವಾದ್ಯಗಳನ್ನ ಕೊಳ್ಳುವಂತೆ ತಿಳಿಸಿದ್ರು. ಸಿಎಂರಿಂದ ಹಣ ಪಡೆದ ಅಂಧ ದಂಪತಿ ಸಿಎಂಗೆ ಕೃತಜ್ಞತೆ ಸಲ್ಲಿಸಿದರು. ನಂತರ ಸಾರ್ವಜನಿಕರಿಂದ ಅಹವಾಲುಗಳನ್ನ ಸ್ವೀಕರಿಸಿದ ಸಿದ್ದರಾಮಯ್ಯ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಾರ್ವಜನಿಕರ ಕೆಲ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಉಳಿದ ಅಹವಾಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.