ಹಾವೇರಿ: ಮೊಬೈಲ್ನಲ್ಲಿ ಜೋರಾಗಿ ಮಾತಾನಾಡಿದ ಎಂಬ ಕ್ಷುಲಕ ಕಾರಣಕ್ಕೆ ಪಂಚಾಯಿತಿ ಸದಸ್ಯನೊಬ್ಬ ವ್ಯಕ್ತಿಗೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅಳಲಗೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಸೋಮಶೇಖರ್ ಎಂಬಾತನಿಗೆ ಪಂಚಾಯತಿ ಸದಸ್ಯ ಗುಡ್ಡಪ್ಪ ಹೊನ್ನತ್ತಿ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾನೆ. ಇಷ್ಟೇ ಅಲ್ಲದೇ ಸಣ್ಣ-ಸಣ್ಣ ಕಾರಣಕ್ಕೆ ಗ್ರಾಮದ ಹಿಂದುಳಿದ ವರ್ಗದ ಜನರಿಗೆ ಧಮ್ಕಿ ಹಾಕಿದ್ದಾನೆ. ಇವನಷ್ಟೇ ಅಲ್ಲದೇ ಈತನ ಸಹೋದರ ನಿಂಗಪ್ಪ ಹೊನ್ನತ್ತಿ ಸಹಕಾರಿ ಬ್ಯಾಂಕ್ ಅಧ್ಯಕ್ಷನಾಗಿ ಶಾಸಕ ಬಸವರಾಜ್ ಶಿವಣ್ಣನವರ್ ಹೆಸರೇಳಿಕೊಂಡು ದಬ್ಬಾಳಿಕೆ ಮಾಡುತ್ತಿದ್ದಾನೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಗುಡ್ಡಪ್ಪ ಹೊನ್ನತ್ತಿ ವಿರುದ್ಧ ಜಾತಿನಿಂದನೆ ಕೇಸ್ ದಾಖಲಾಗಿದ್ದು, ಆದರೂ ಪೊಲೀಸರು ಇವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಕೂಡಲೇ ಬಂಧಿಸಿ ಹಾಗೂ ಆತನ ಗ್ರಾಮ ಪಂಚಾಯಿತಿ ಸದಸ್ಯತ್ವ ರದ್ದು ಮಾಡಿ ಅಂತ ಆಗ್ರಹಿಸಿದ್ದಾರೆ.