ಬೆಂಗಳೂರು: ಪ್ರೀತಿ ಮಾಡಲು ನಿರಾಕರಣೆ ಮಾಡಿದ್ದಕ್ಕೆ ಯುವತಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಾನಸ (20) ಚಾಕು ಇರಿತಕ್ಕೆ ಒಳಗಾದ ಯುವತಿ. ಬುಧವಾರ ಕಾಲೇಜಿಗೆ ಹೋಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮಾನಸ ನಿನ್ನೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಆಕೆಯನ್ನು ಅಡ್ಡ ಹಾಕಿ `ಪ್ರೀತಿ ಮಾಡೋದಾದ್ರೆ ನನ್ನನೇ ಪ್ರೀತಿ ಮಾಡ್ಬೇಕು. ಬೇರೊಬ್ಬ ಹುಡುಗನನ್ನು ಪ್ರೀತಿ ಮಾಡುವಂತಿಲ್ಲ. ಬೇರೆ ಹುಡುಗನನ್ನು ನೀನು ಪ್ರೀತಿ ಮಾಡ್ತಾ ಇದ್ದೀಯ ಅಂತ ಗೊತ್ತು. ಅವನ ಜೊತೆ ನಿನ್ನ ಪ್ರೀತಿ ಮುಂದುವರೆಯಬಾರದು’ ಅಂತಾ ಕೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಸದ್ಯ ನಗರದ ಆಸ್ಪತ್ರೆಯೊಂದರಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದು, ಈ ಮೊದಲು ಅಂದ್ರೆ ಕಳೆದ ಮೂರು ದಿನಗಳ ಹಿಂದೆ ದುಷ್ಕರ್ಮಿಗಳು ಲ್ಯಾಂಡ್ಲೈನ್ನಿಂದ ಫೋನ್ ಮಾಡಿ ಬೆದರಿಕೆ ಕೂಡ ಹಾಕಿದ್ದರು ಅಂತ ಯುವತಿ ಹೇಳಿದ್ದಾಳೆ.
ಸದ್ಯ ಈ ಕುರಿತು ಬೆಂಗಳೂರಿನ ಅನ್ನಪೂರ್ಣೆಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.