ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೊಡ್ಡ ನಟ ಅಂತಾ ಟೀಕಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಕಾಶ್ ರೈ ಸಿನಿಮಾಗಳಲ್ಲಿ ಖಳ ನಟನ ಪಾತ್ರ ಮಾಡುತ್ತಾ ಮಾಡುತ್ತಾ ತಮ್ಮೊಳಗೆ ಖಳನ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ. ಪ್ರಕಾಶ್ ರೈ ವೈಯ್ಯಕ್ತಿಕ ಜೀವನಕ್ಕೂ, ನಟನ ಜೀವನಕ್ಕೂ ಬಹಳ ಸಾಮ್ಯತೆ ಇದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಮೋದಿ ನನಗಿಂತ ಹಿರಿಯ ನಟ: ಪ್ರಕಾಶ್ ರಾಜ್
ತಮ್ಮ ದಂಧೆಗಾಗಿ, ಹಣಕ್ಕಾಗಿ ತಮಿಳುನಾಡಲ್ಲಿ ಪ್ರಕಾಶ ರೈ ಆಗುತ್ತಾರೆ, ಇಲ್ಲಿ ಪ್ರಕಾಶ್ ರಾಜ್ ಆಗುತ್ತಾರೆ. ಗೌರಿ ಹತ್ಯೆಗೂ ಪ್ರಧಾನ ಮಂತ್ರಿಗಳೂ ಏನೂ ಸಂಬಂಧವಿದೆ. ಸಂಘ ಪರಿವಾರದವರ ಹತ್ಯೆ ಆದಾಗಲೂ ಪ್ರಧಾನಿ ಅವರು ಪ್ರತಿಕ್ರಿಯೆ ಕೊಟ್ಟಿಲ್ಲ. ಆಗಾಂತ ನಾವು ಪ್ರಧಾನಿಯನ್ನು ದೂರುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿಗಳ ವಿರುದ್ಧ ಸಾರ್ವಜನಿಕವಾಗಿ ಟೀಕೆ ಮುಂದುವರಿಸಿದರೆ ಅವರು ನಿಂತಿರುವ ವೇದಿಕೆಗಳಿಗೆ ಹೋಗಿ ನಾವು ತಕ್ಕ ಉತ್ತರ ಕೊಡುತ್ತೇವೆ ಎಂದು ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಲು ಹುಚ್ಚು ಹೇಳಿಕೆ: ಪ್ರಕಾಶ್ ರಾಜ್ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ