ಬೆಂಗಳೂರು: ಸಿಲಿಕಾನ್ ಸಿಟಿಗೆ ಅಂತೂ ಮಳೆರಾಯ ತಂಪೆರೆದಿದ್ದಾನೆ. ಸಂಜೆಯಾಗುತ್ತಿದ್ದಂತೆ ನಗರದ ಹಲವೆಡೆ ಕಾಣಿಸಿಕೊಂಡ ವರುಣ ಎಡೆಬಿಡದೆ ಸುರಿದಿದ್ದಾನೆ.
ಯಶವಂತಪುರ, ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್, ಯಲಹಂಕ, ದೊಡ್ಡಬಳ್ಳಾಪುರ, ಇಸ್ರೋ ಲೇಔಟ್, ಪುಟ್ಟೇನಹಳ್ಳಿಯಲ್ಲೂ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.
ದಿಢೀರ್ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯ್ತು. ತಿಲಕ್ನಗರದಲ್ಲಿ ರಸ್ತೆಗೆ ಅಡ್ಡವಾಗಿ ಮರ ಬಿದ್ದಿದೆ. ಅತ್ತ ಮೈಸೂರು, ಚಾಮರಾಜನಗರ ಹಾಗೂ ತುಮಕೂರು, ಮೈಸೂರು ಜಿಲ್ಲೆಯಲ್ಲೂ ಮಳೆಯಾಗಿದೆ.
ತಮಿಳುನಾಡು ಮತ್ತು ಶ್ರೀಲಂಕಾದ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ರಾಜ್ಯದಲ್ಲಿ ಮೂರು ದಿನಗಳ ಕಾಲ ಸಾಧಾರಣ ಮಳೆ ಬೀಳಲಿದೆ.
Rain in March purely magical. Only in Bengaluru pic.twitter.com/mzBhDiLBCK
— Venkatesh Deshpande (@deshvenkatesh) March 6, 2017
The First Rain of Bengaluru https://t.co/M75eJFIqZh pic.twitter.com/E4hoY1RMFm
— Parinitha P (@parinitha_p) March 6, 2017