ಬಾಗಲಕೋಟೆ: ರೈತರ ಹೊಲಕ್ಕೆ ಮೊಸಳೆ ನುಗ್ಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದಲ್ಲಿ ನಡೆದಿದೆ.
ರಮೇಶ್ ಹಂಚಿನಾಳ ಹಾಗೂ ಮಲ್ಲಪ್ಪ ಮೇಟಿ ಎಂಬವರ ಹೊಲದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಘಟಪ್ರಭಾ ನದಿಯಿಂದ ಎಂಟು ಅಡಿ ಉದ್ದದ ಮೊಸಳೆ ಹೊಲಕ್ಕೆ ನುಗ್ಗಿದ್ದು, ಮುಳ್ಳಿನ ಕಂಟಿಯಲ್ಲಿ ಸೇರಿಕೊಂಡಿದೆ.
ಮೊಸಳೆ ಕಂಡು ರೈತರು ಆತಂಕಕ್ಕೀಡಾಗಿದ್ದು ಮೊಸಳೆ ಸ್ಥಳಾಂತರಕ್ಕೆ ಅರಣ್ಯಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.