ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟಕ್ಕೆ ಹೋಗೋ ಭಕ್ತರು ಇನ್ಮುಂದೆ ಸ್ವಲ್ಪ ಹುಷಾರಾಗಿರಬೇಕು. ಯಾಕಂದ್ರೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಕಲ್ಯಾಣಿಯ ನೀರು ಮಲಿನಗೊಂಡಿದೆ.
ಮೋರಿ ನೀರು ಹಾಗೂ ಶೌಚಾಲಯದ ನೀರು ಸೇರಿ ಕಲ್ಯಾಣಿಯ ಶುದ್ಧ ನೀರು ಕೊಳತು ನಾರುತ್ತಿದೆ. ಇದೇ ಕಲ್ಯಾಣಿಯಲ್ಲಿ ವರ್ಷಕ್ಕೆ ನಾಲ್ಕು ಬಾರಿ ಮಹದೇಶ್ವರನ ಉತ್ಸವ ಮೂರ್ತಿಯನ್ನು ಇಟ್ಟು ತೆಪ್ಪೋತ್ಸವ ಮಾಡಲಾಗುತ್ತೆ.
ಕಲ್ಯಾಣಿ ಮಾತ್ರವಲ್ಲದೆ ಕುಡಿಯುವ ನೀರಿನ ಕೊಳಕ್ಕೂ ಶೌಚಾಲಯದ ನೀರು ಸೇರುತ್ತಿದ್ದು, ಭಕ್ತರು ಇದೇ ನೀರನ್ನು ಕುಡಿಯಬೇಕಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಆದಾಯ ತರುವ 2ನೇ ದೇಗುಲ ಇದಾಗಿದ್ದು, ಭಕ್ತರಿಗೆ ಕನಿಷ್ಠ ಸೌಲಭ್ಯ ನೀಡುವಲ್ಲಿ ಪ್ರಾಧಿಕಾರ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.