ಬೆಂಗಳೂರು: ಸಾಲಮನ್ನಾ ಹೆಸರಿನಲ್ಲಿ ಖುಷಿ ಖುಷಿಯಾಗಿರೋ ಕಾಂಗ್ರೆಸ್ ಶಾಸಕರು ಮತ್ತು ಮಿನಿಸ್ಟರ್ಗಳಿಗೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಯಾವುದೇ ಮಂತ್ರಿ ಅಥವಾ ಶಾಸಕರು ಹಗರಣ ಅಥವಾ ಲೈಂಗಿಕ ಪ್ರಕರಣಗಳಲ್ಲಿ ಸಿಲುಕಿಕೊಳ್ಳದಂತೆ ವೇಣುಗೋಪಾಲ್ ವಾರ್ನಿಂಗ್ ಕೊಟ್ಟಿದ್ದಾರೆ. ನಮ್ಮ ಮುಂದಿರೋದು ಚುನಾವಣಾ ವರ್ಷ. ಹಾಗಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಹ ಭ್ರಷ್ಟಾಚಾರ ಅಥವಾ ಲೈಂಗಿಕ ಪ್ರಕರಣಗಳಲ್ಲಿ ಭಾಗಿಯಾಗದಂತೆ ಶಾಸಕರಿಗೆ ಮತ್ತು ಮಂತ್ರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.
ಒಂದೊಮ್ಮೆ ಸಿಲುಕಿದ್ದೇ ಆದಲ್ಲಿ ಮುಂದಿನ ಎಲೆಕ್ಷನ್ನಲ್ಲಿ ಟಿಕೆಟ್ ನೀಡುವುದಿಲ್ಲ. ಇದು ಹಾಲಿ ಶಾಸಕರಿಗೂ ಅನ್ವಯಿಸುತ್ತೆ ಮತ್ತು ಚುನಾವಣಾ ಆಕಾಂಕ್ಷಿಗಳಿಗೂ ಅನ್ವಯಿಸುತ್ತದೆ ಅಂತ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ ಎನ್ನಲಾಗಿದೆ.