ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಪಿ.ಎಸ್.ಐ ಶಿವಾನಂದ ಎಸ್. ಲಮಾಣಿ ಇವರು ಅಕ್ರಮ ಮರಳು ದಂಧೆಕೊರರಿಂದ ಲಂಚ ಪಡೆಯುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಗದಗ ಎಸ್.ಪಿ ಸಂತೋಷ ಬಾಬು ಅವರು ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿದ್ರೆ, ಇತ್ತ ಗಜೇಂದ್ರಗಡ ಪಿ.ಎಸ್.ಐ ಶಿವಾನಂದ ಲಂಚಪಡೆದು ಅಕ್ರಮಕ್ಕೆ ದಂಧೆಗೆ ದಾರಿ ಮಾಡಿಕೊಡುತ್ತಿದ್ದಾರೆ.
ಟ್ರಾಕ್ಟರ್ ಹಾಗೂ ಟಿಪ್ಪರ್ ನಿಂದ ಅಕ್ರಮವಾಗಿ ಕಲ್ಲು, ಮಣ್ಣು, ಮರಳು ಇತರೆ ಯಾವುದೆ ವಸ್ತುಗಳನ್ನ ಸಾಗಿಸುವ ದಂಧೆಕೊರರು ಈ ಪಿಎಸ್ಐ ಅವರನ್ನು ಸಂಪರ್ಕಿಸಿ ತಿಂಗಳ ಮಾಮೂಲಿ ನೀಡಿ ಕೈ ಬೆಚ್ಚಗೆ ಮಾಡಬೇಕು. ಇಲ್ಲವಾದ್ರೆ ಅವರನ್ನ ಅಂದರ್ ಮಾಡಿ ಇಲ್ಲ ಸಲ್ಲದ ಕೇಸ್ಗಳನ್ನ ಜಡಿದುಬಿಡ್ತಾರೆ ಎಂಬ ಆರೋಪ ಕೇಳಿಬರುತ್ತಿದೆ.
ಗಜೇಂದ್ರಗಡ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ದಂಧೆಯಿಂದ ಪ್ರತಿ ತಿಂಗಳು ಸುಮಾರು 2 ಲಕ್ಷ ರೂಪಾಯಿ ಲಂಚ ಪಡೆಯುತ್ತಾರೆ ಎಂಬ ಆರೋಪನೂ ಇದೆ. ಲಂಚ ಕೊಡದಿದ್ರೆ ಅಟ್ಟಾಡಿಸಿಕೊಂಡು ಹೊಡೆದು, ಅವರ ಮೇಲೆ ಕೇಸ್ ದಾಖಲಿಸಿ ಮೂಲೆ ಗುಂಪು ಮಾಡ್ತಾರೆ.
ತೊಡೆತಟ್ಟಿ ಸೆಡ್ಡು ಹೊಡೆದು ಬಾಯಿಗೆ ಬಂದಂತೆ ಅಶ್ಲೀಲವಾಗಿ ಬೈದು ಅವರ ಮೇಲೆ ದರ್ಪ ತೋರಿಸ್ತಾರೆ. ಈ ಎಲ್ಲಾ ದೃಶ್ಯಗಳು ಪಬ್ಲಿಕ್ ಟಿವಿಗೆ ಇದೀಗ ಲಭ್ಯವಾಗಿದೆ.