ಕಲಬುರಗಿ: ಹಲವಾರು ಟೀಕೆಗಳ ನಂತರ ಕಲಬುರಗಿಯಲ್ಲಿ ಬಹಮನಿ ಉತ್ಸವ ರದ್ದಾಗಿದೆ. ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಕೊನೆಗೂ ಮಣಿದ ರಾಜ್ಯ ಸರ್ಕಾರ ಉತ್ಸವ ಆಚರಣೆಯಿಂದ ಹಿಂದೆ ಸರಿದಿದೆ.
ಸಚಿವ ಸಂಪುಟ ಸಭೆಯಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ, ಯಾರ ಜೊತೆ ಚರ್ಚಿಸಿ ನೀವು ಉತ್ಸವ ಮಾಡಲು ಹೊರಟಿದ್ದಿರಿ ಪಾಟೀಲರೇ? ಏತಕ್ಕಾಗಿ ಉತ್ಸವ ಮಾಡಲು ಹೊರಟಿರಿ?. ನಾನು ಜನರಿಗೆ, ಮಾಧ್ಯಮದವರಿಗೆ ಏನಂತ ಉತ್ತರ ಕೊಡಲಿ? ಎಂದು ಸಿಎಂ ಅವರು ಸಚಿವರಿಗೆ ಪ್ರಶ್ನೆಗಳ ಸುರಿಮಳೆಗೈದರು.
ಈ ಕೂಡಲೇ ನೀವು ಕಲಬುರಗಿಗೆ ತೆರಳಿ ಉತ್ಸವ ರದ್ದು ಅಂತಾ ಅಧಿಕೃತವಾಗಿ ಘೋಷಣೆ ಮಾಡಿ ಅಂತಾ ಸಿಎಂ ತಾಕೀತು ಮಾಡಿದ್ದಾರೆ ಅಂತ ಪಬ್ಲಿಕ್ ಟಿವಿಗೆ ಉನ್ನತ ಮೂಲಗಳ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಬಹಮನಿ ಸುಲ್ತಾನರ ಉತ್ಸವ ಆಚರಣೆಯಿಂದ ಸಚಿವರು ಹಿಂದೆ ಸರಿದಿದ್ದಾರೆ ಅಂತ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.
https://www.youtube.com/watch?v=4RlmyYKDuh0