ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಮದಲಹಳ್ಳಿ ಕರೆಯಲ್ಲಿ ಮೀನುಗಾರರು ಬೀಸಿದ ಬಲೆಗೆ ಮೀನು ಸಿಗುವ ಬದಲು ಎಟಿಎಂ ಯಂತ್ರ ಸಿಕ್ಕಿದೆ.
ದರೋಡೆಕೋರರು ಎಟಿಎಂ ಯಂತ್ರವನ್ನು ಕದ್ದು ತಂದು ಅದರಲ್ಲಿಯ ಹಣವನ್ನು ತೆಗೆದು ಕೊನೆಗೆ ಯಂತ್ರವನ್ನು ಕೆರೆಗೆ ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಕೆರೆಯಲ್ಲಿ ನೀರು ಕಡಿಮೆಯಾಗಿದ್ದು, ಮೀನುಗಾರರು ಬೀಸಿದ್ದ ಬಲೆಗೆ ಎಟಿಎಂ ಯಂತ್ರ ಸಿಕ್ಕಿದೆ.
ಈ ಬಗ್ಗೆ ಕೂಡಲೇ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ನಾಗಮಂಗಲ ಪಟ್ಟಣ ಪೊಲೀಸರು ಕೆರೆಯಲ್ಲಿ ಪತ್ತೆಯಾದ ಎಟಿಎಂ ಯಂತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಎಟಿಎಂ ಯಂತ್ರ ಯಾವ ಬ್ಯಾಂಕಿಗೆ ಸೇರಿದ್ದು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ಹೊಸ ನೋಟುಗಳ ನಕಲು ತಡೆಗೆ ಸರ್ಕಾರ ಮಾಡಿರೋ ಪ್ಲಾನ್ ಏನು ಗೊತ್ತಾ?