ತುಮಕೂರು: ಮನೆಗೆ ನುಗ್ಗಿದ ಕಿಡಿಗೇಡಿಗಳು ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಗಾನಹಳ್ಳಿಯಲ್ಲಿ ನಡೆದಿದೆ.
ಬಸವರಾಜು (70) ಪುಟ್ಟ ವೀರಮ್ಮ (60) ಹಾಗೂ ಮಗ ಜಗದೀಶ್ ಹಲ್ಲೆಗೊಳಗಾದವರು. ಪ್ರಸನ್ನ ಹಾಗೂ ನರಸಿಂಹರಾಜು ಸಹಚರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಗ್ರಾಮದ ಕೆರೆಯನ್ನು ನರಸಿಂಹರಾಜು ಕಡೆಯವರು ಒತ್ತುವರಿ ಮಾಡಿದ್ದರು. ಇದನ್ನ ಜಗದೀಶ್ ಸರ್ಕಾರಕ್ಕೆ ತಿಳಿಸಿ ತೆರವುಗೊಳ್ಳಿಸಿದ್ದರು. ಇದರ ದ್ವೇಷಕ್ಕೆ ಮನೆಗೆ ನುಗ್ಗಿದ ಕಿಡಿಗೇಡಿಗಳು ಮನೆಯ ಬಾಗಿಲು, ಪಿಠೋಪಕರಣಗಳನ್ನ ಧ್ವಂಸಗೊಳಿಸಿದ್ದಾರೆ. ಅಲ್ಲದೇ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಜಗದೀಶ್ ಮತ್ತು ತಂದೆ ತಾಯಿಗೆ ಗಂಭೀರ ಗಾಯಗಳಾಗಿವೆ.
ಸದ್ಯ ಗಾಯಾಳುಗಳನ್ನು ಕೊರಟಗೆರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.