ಬೆಂಗಳೂರು: ಸ್ಯಾಂಡಲ್ವುಡ್ನ ಬಹುಬೇಡಿಕೆಯ ನಟಿ ಅಮೂಲ್ಯ ಬೆಂಗಳೂರಿನ ಮಾಜಿ ಪಾಲಿಕೆ ಸದಸ್ಯ ರಾಮಚಂದ್ರೇಗೌಡರ ಮಗ ಜಗದೀಶ್ ಜೊತೆ ಮಾರ್ಚ್ 6 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾಧ್ಯಮ ಮಂದಿ ಅಮೂಲ್ಯರನ್ನು ಮಾತನಾಡಿಸಿದಾಗ ಎರಡು ವರ್ಷದಿಂದ ಜಗದೀಶ್ ಅವರು ನನಗೆ ನಟ ಗಣೇಶ್ ಪತ್ನಿ ಶಿಲ್ಪಾರಿಂದಾಗಿ ಪರಿಚಯ ಆಗಿದ್ರು. ತದ ನಂತ್ರ ಅವರನ್ನು ನಾನು ಕಾರ್ಯಕ್ರಮದಲ್ಲಿ ನೋಡಿದ್ದೆ ಅಂತಾ ಹೇಳಿದರು.
ಇದು ಅರೆಂಜ್ ಮ್ಯಾರೇಜ್ ಆಗಿದ್ದು, ಈಗಾಗಲೇ ಮೊದಲ ಶಾಸ್ತ್ರ ಮುಗಿಸಿದ್ದೇವೆ. ಮದುವೆ ಶೀಘ್ರವೇ ನಡೆಯಲಿದೆ. ಮದುವೆ ಬಳಿಕ ಚಿತ್ರಗಳಲ್ಲಿ ನಟಿಸುವ ಬಗ್ಗೆ ಇನ್ನೂ ಚಿಂತಿಸಿಲ್ಲ ಅಂದ್ರು. ಶಿಲ್ಪಾ ಮೇಡಂ ನನಗೆ ಜಗದೀಶ್ ಬಗ್ಗೆ ಹೇಳಿದ್ದಾರೆ. ಒಟ್ಟಿನಲ್ಲಿ ಜಗದೀಶ್ದ್ದು ತುಂಬಾ ಫ್ರೆಂಡ್ಲಿ ನೇಚರ್ ಅಂತಾ ಅಮೂಲ್ಯ ತನ್ನ ಭಾವಿ ಪತಿ ಬಗ್ಗೆ ಹೇಳಿದ್ರು.
ಮದ್ವೆ ಅಂದಮೇಲೆ ಎಲ್ರಿಗೂ ನಂಗೆ ಇಂತಹ ಹುಡ್ಗಿ ಬೇಕು ಅನ್ನೋ ಕನಸುಗಳಿರುತ್ತವೆ. ಮೊದಲ ಬಾರಿಗೆ ಮೂವಿ ಕಾರ್ಯಕ್ರಮವೊಂದರಲ್ಲಿ ಅಮೂಲ್ಯರನ್ನ ಭೇಟಿ ಮಾಡಿದ್ದೇನೆ. ಆ ಬಳಿಕ ಎರಡು ಬಾರಿ ಅವರನ್ನ ಭೇಟಿ ಮಾಡಿದ್ದೇನೆ. ಆದ್ರೆ ಈ ಮೂರು ಬಾರಿ ಭೇಟಿಯಾದಗ್ಲೂ ನಾನು ಅವರನ್ನ ಮದುವೆ ಆಗುತ್ತೇನೆ ಅಂತಾ ಕಲ್ಪನೆ ಮಾಡಿಕೊಂಡಿರಲಿಲ್ಲ. ಆದ್ರೆ ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ. ಪ್ರಪೋಸಲ್ ಹೇಳಿದಾಗ ಇಬ್ರ ಜಾತಕ ನೋಡೋಣ ಅಂತಾ ತೀರ್ಮಾನಿಸಿದ್ದೆ. ಅಂತೆಯೇ ನಮ್ಮಿಬ್ಬರ ಜಾತಕ ಕೂಡಿ ಬಂದಿದ್ದು, ಇಂದು ಮೊದಲ ಶಾಸ್ತ್ರ ಮುಗಿಸಿದ್ದೇವೆ. ಇದು ಗಣೇಶ್ ಮತ್ತು ಶಿಲ್ಪಾ ಮೇಡಮ್ ಅವರಿಂದಾಗಿ ನಾವಿಬ್ಬರೂ ಮದುವೆ ಆಗಲು ಸಾಧ್ಯವಾಯಿತು ಅಂತಾ ಹೇಳಿದ್ರು.
ಒಟ್ಟಿನಲ್ಲಿ ಲಂಡನ್ನಲ್ಲಿ ಉನ್ನತ ವ್ಯಾಸಂಗ ಮಾಡಿಕೊಂಡು ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಜಗದೀಶ್ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ.