ಕೊಪ್ಪಳ: ಗ್ರಾಹಕರೆ ಮೊಬೈಲ್ ಖರೀದಿಸೋ ಮುನ್ನ ಎಚ್ಚರ ವಹಿಸಿ. ಯಾಕಂದ್ರೆ ಎಂಐ ನೋಟ್ 4 ಮೊಬೈಲ್ ಬ್ಲಾಸ್ಟ್ ಆಗಿ ಯುವಕನಿಗೆ ಗಂಭೀರ ಗಾಯವಾಗಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, ಹನುಮೇಶ್ ಹರಿಜನ ಎಂಬವರು ತಮ್ಮ ಮೊಬೈಲನ್ನು ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡಾಗ ಏಕಾಏಕಿ ಬ್ಲಾಸ್ಟ್ ಆಗಿದೆ. ಪರಿಣಾಮ ಯುವಕನ ತೊಡೆಭಾಗ ಮತ್ತು ಮರ್ಮಾಂಗಕ್ಕೆ ಗಂಭೀರ ಗಾಯಗಳಾಗಿವೆ.
ಹನುಮೇಶ್ ಹರಿಜನ ಆನ್ಲೈನ್ ಮೂಲಕ ಮೊಬೈಲ್ ಖರೀದಿಸಿದ್ದರು. ಸದ್ಯ ಗಾಯಗೊಂಡಿರುವ ಯುವಕ ಹನುಮೇಶರನ್ನು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.