ಟುಟಿಕೋರಿನ್: ಬಂಗಾಳಕೊಲ್ಲಿಯಲ್ಲಿ ಭೀಕರ ದೋಣಿ ದುರಂತ ಸಂಭವಿಸಿದೆ. ಭಾನುವಾರ ಸಂಜೆ 5.30ರ ವೇಳೆಯಲ್ಲಿ ಪ್ರವಾಸಿಗರಿದ್ದ ಬೋಟ್ ಮಗುಚಿಬಿದ್ದು 9 ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಟುಟಿಕೋರಿನ್ನಿಂದ 60 ಕಿ.ಮೀ ದೂರದಲ್ಲಿರುವ ಮನಪ್ಪಾಡು ಎಂಬಲ್ಲಿ ನಡೆದಿದೆ.
ಐವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 9 ಮಂದಿಯ ಶವಗಳು ಸಿಕ್ಕಿವೆ. ರಕ್ಷಣಾ ಕಾರ್ಯದಲ್ಲಿ 11 ಮಂದಿಯನ್ನ ರಕ್ಷಿಸಲಾಗಿದೆ ಎಂದು ಟುಟಿಕೋರಿನ್ ಜಿಲ್ಲಾಧಿಕಾರಿ ಎಂ ರವಿಕುಮಾರ್ ತಿಳಿಸಿದ್ದಾರೆ.
ಮಧುರೈ ಮತ್ತು ತಿರುಚ್ಚಿಯ ಮೂರು ಕುಟುಂಬಗಳು ಬೋಟ್ಗಳನ್ನ ಬುಕ್ ಮಾಡಿದ್ದಾರೆಂಬ ಮಾಹಿತಿ ಸದ್ಯಕ್ಕೆ ದೊರೆತಿದೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚಿನ ಮಂದಿ ಬೋಟ್ನಲ್ಲಿ ಪ್ರಯಾಣಿಸುತ್ತಿದ್ದುದೇ ಘಟನೆಗೆ ಕಾರಣ ಎಂದು ಹೇಳಲಾಗ್ತಿದೆ.
Tamil Nadu: 9 tourists dead, 11 rescued after a boat carrying 20 capsized in sea near Manapad area of Tuticorin. pic.twitter.com/PWGtVWmUcO
— ANI (@ANI_news) February 26, 2017